*ವಾರಸುದಾರರಿಗೆ 2 ಲಕ್ಷ ರೂ. ಬೆಲೆ ಬಾಳುವ ಬಂಗಾರ ಆಭರಣ ಮರಳಿಸಿದ ಅಥಣಿ ಪೊಲೀಸ್* *ಪ್ರಾಮಾಣಿಕತೆ ಮೆರೆದ ಪ್ರದೀಪ್ ನಂದಗಾಂವ್ ಕಾರ್ಯಕ್ಕೆ ಪೊಲೀಸ್ ಇಲಾಖೆ ಶ...
*ವಾರಸುದಾರರಿಗೆ 2 ಲಕ್ಷ ರೂ. ಬೆಲೆ ಬಾಳುವ ಬಂಗಾರ ಆಭರಣ ಮರಳಿಸಿದ ಅಥಣಿ ಪೊಲೀಸ್*
*ಪ್ರಾಮಾಣಿಕತೆ ಮೆರೆದ ಪ್ರದೀಪ್ ನಂದಗಾಂವ್ ಕಾರ್ಯಕ್ಕೆ ಪೊಲೀಸ್ ಇಲಾಖೆ ಶ್ಲಾಘನೆ*
ವ್ಯಕ್ತಿಯೊಬ್ಬ ಬ್ಯಾಗ್ ಕಳೆದುಕೊಂಡಿದ್ದ . ವಿಜಯಪುರ ಜಿಲ್ಲೆಯ ರೇವಣಸಿದ್ದ ವಿಠ್ಠಲ ಹೂಗಾರ ಸಾಕಿನ್ ಹೊರ್ತಿ ಇವರು ಸವದತ್ತಿಗೆ ಹೋಗುವಾಗ ಖವಟಕೊಪ್ಪ ಮಾರ್ಗವಾಗಿ ಹೊಗುವಾಗ ತನ್ನ ಬ್ಯಾಗ್ ಒಂದನ್ನು ಕಳೆದುಕೊಂಡಿದ್ದಾನೆ. ನಂತರ ಖವಟಕೊಪ್ಪ ಗ್ರಾಮದ ಪ್ರದೀಪ್ ಬಾಬು ನಂದಗಾಂವ್ ಇವರಿಗೆ ಸಿಕ್ಕದ್ದು, ಅದರಲ್ಲಿ ನೋಡಲಾಗಿ ಚೈನ್,ಕಡಗ ಸೇರಿದಂತೆ ಸುಮಾರು 2ಲಕ್ಷ ರೂ. ಬೆಲೆಬಾಳುವ ಬಂಗಾರದ ಆಭರಣ ಇರುವುದು ಕಂಡುಬಂದಿದೆ.
ನಂತರ ಬಂಗಾರದ ಆಭರಣವಿರುವ ಬ್ಯಾಗ್ ನ್ನು ಖವಟಕೊಪ್ಪ ಗ್ರಾಮದ ಪ್ರದೀಪ್ ಎಂಬುವವರು ಅಥಣಿ ಪೊಲೀಸ್ ಠಾಣೆಗೆ ತಂದು ಒಪ್ಪಿಸಲಾಗಿ, ವಾರಸುದಾರರಿಗೆ 2 ಲಕ್ಷ ರೂ. ಬೆಲೆ ಬಾಳುವ ಬಂಗಾರದ ಆಭರಣ ಅಥಣಿ ಪೊಲೀಸರು
ವಾರಸುದಾರನಿಗೆ ಮರಳಿಸಿದ್ದು ಬಂಗಾರವಿರುವ ಬ್ಯಾಗ್ ನ್ನು ಠಾಣೆಗೆ ತಂದು ಒಪ್ಪಿಸಿದ ವ್ಯಕ್ತಿಯ ಕಾರ್ಯಕ್ಕೆ ಪೊಲೀಸ್ ಇಲಾಖೆ ಶ್ಲಾಘನೆ ವ್ಯಕ್ತಪಡಿಸಿದೆ.
ಈ ಸಂದರ್ಭದಲ್ಲಿ ಸಿಪಿಐ ಸಂತೋಷ್ ಹಳ್ಳೂರ, ಪಿಎಸ್ಐ ಗಿರಿಮಲ್ಲಪ್ಪ ಉಪ್ಪಾರ ಕುಮಾರ್ ಹಾಡಕರ್ ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಅಲ್ಲಾವುದ್ದೀನ್ ಶೇಖ್ ನ್ಯೂಸ್ ಪ್ರೈಮ್ ಚಿಕ್ಕೋಡಿ