ಅಥಣಿ : ಇತ್ತೀಚಿನ ದಿನಗಳಲ್ಲಿ ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸ್ವತ್ತಿನ ಅಪರಾಧ ಪ್ರಕರಣ ಹೆಚ್ಚಾದ ಹಿನ್ನೆಲೆ ಬೆಳಗಾವಿ ಎಸ್ ಪಿ ಡಾ ಭೀಮಾಶಂಕರ ಗುಳೇದ...
ಅಥಣಿ : ಇತ್ತೀಚಿನ ದಿನಗಳಲ್ಲಿ ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸ್ವತ್ತಿನ ಅಪರಾಧ ಪ್ರಕರಣ ಹೆಚ್ಚಾದ ಹಿನ್ನೆಲೆ ಬೆಳಗಾವಿ ಎಸ್ ಪಿ ಡಾ ಭೀಮಾಶಂಕರ ಗುಳೇದ ಹಾಗೂ ಐಪಿಎಸ್ ಅಧಿಕಾರಿ ಶೃತಿ ಏನ್ ಅವರ ಆದೇಶದ ಮೇರೆಗೆ ಅಥಣಿ ಪೊಲೀಸ್ ರಿಂದ ಭರ್ಜರಿ ಕಾರ್ಯಾಚರಣೆ ಮೂಲಕ ಕಳ್ಳರನ್ನ ಹೆಡೆಮುರಿ ಕಟ್ಟಿ ಸುಮಾರು 13 ಬೈಕ್ ಗಳನ್ನು ವಶಕ್ಕೆ ಪಡೆದಿದ್ದಾರೆ.
ಹೆಚ್ಚುವರಿ ಪೊಲೀಸ್ ಅಧಿಕ್ಷಕ ಆರ್ ಬಿ ಬಸರಗಿ, ಡಿ ಎಸ್ ಪಿ ಪ್ರಶಾಂತ ಮುನ್ನೊಳ್ಳಿ, ಸಿಪಿಐ ರವೀಂದ್ರ ನಾಯ್ಕೋಡಿ ನೇತೃತ್ವದ ತಂಡ ಮಿಂಚಿನ ಕಾರ್ಯಚರಣೆ ಮಾಡುವ ಮೂಲಕ ಕಳ್ಳರನ್ನ ಪತ್ತೆಹಚ್ಚಿದ್ದು ಪೊಲಿಸರ ಕಾರ್ಯಕ್ಕೆ ಎಲ್ಲೇಡೆ ಪ್ರಶಂಸೆ ವ್ಯಕ್ತವಾಗಿದೆ.
ನೆರೆಯ ಮಹಾರಾಷ್ಟ್ರದ ಜತ್ ತಾಲೂಕಿನ ಶಿಂಧೂರ ಗ್ರಾಮದ ಅಮೋಲ ಜಿತೇಂದ್ರ ಪವಾರ ಹಾಗೂ ಅಥಣಿ ತಾಲೂಕಿನ ಮದಭಾವಿ ಗ್ರಾಮದ ಲಖನ್ ಮಾರುತಿ ಸುಂಗಾರೆ ಬೈಕ್ ಕಳುವು ಮಾಡಿ ಆರು ಬೈಕ್ ಮಾರಾಟ ಮಾಡಿದ್ದರು ಇಬ್ಬರನ್ನ ಪತ್ತೆಹಚ್ಚಿದ ಪೊಲೀಸರು ಸುಮಾರು 475000/- ಮೌಲ್ಯದ 13 ಬೈಕ್ ವಶಪಡಿಸಿಕೊಂಡು ಆರೋಪಿತರನ್ನ ನ್ಯಾಯಾಂಗ ಬಂದನಕ್ಕೆ ಒಳಪಡಿಸಿದ್ದಾರೆ.