ಅಥಣಿಯಲ್ಲಿ ಎರಡು ದಿನಗಳ ಕಾಲ ಬೃಹತ್ ಉಚಿತ ನೇತ್ರ ತಪಾಸಣಾ, ಶಸ್ತ್ರಚಿಕಿತ್ಸಾ ಶಿಬಿರ.. ಅಥಣಿ: ತಾಲೂಕಾ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ನಾಳೆ ದಿ. 29...
ಅಥಣಿಯಲ್ಲಿ ಎರಡು ದಿನಗಳ ಕಾಲ ಬೃಹತ್ ಉಚಿತ ನೇತ್ರ ತಪಾಸಣಾ, ಶಸ್ತ್ರಚಿಕಿತ್ಸಾ ಶಿಬಿರ..
ಅಥಣಿ: ತಾಲೂಕಾ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ನಾಳೆ ದಿ. 29ರಂದು ಮುಂಜಾನೆ 10 30 ಗಂಟೆಗೆ ಬೃಹತ್ ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರದ ಉದ್ಘಾಟನಾ ಸಮಾರಂಭ ಜರುಗಲಿದೆ.ಈ ಸಮಾರಂಭದಲ್ಲಿ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಉದ್ಘಾಟಕರಾಗಿ, ಕಾಗವಾಡ ಶಾಸಕ ಹಾಗೂ ವಾಯವ್ಯ ಕರ್ನಾಟಕ ರಸ್ತೆಸಾರಿಗೆ ಸಂಸ್ಥೆ ಅಧ್ಯಕ್ಷ ರಾಜು ಕಾಗೆ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಈ ಶಿಬಿರದ ಬಗ್ಗೆ ತಾಲೂಕಾಆರೋಗ್ಯಾಧಿಕಾರಿ ಡಾ. ಬಸಗೌಡಾ ಕಾಗೆಮಾತನಾಡಿ ಮಾಜಿ ಉಪಮುಖ್ಯಮಂತ್ರಿಹಾಗೂ ಶಾಸಕ ಲಕ್ಷ್ಮಣ ಸವದಿ ಇವರಸಹಯೋಗದಲ್ಲಿ ನಾಳೆ ದಿ. 29ರಂದು ಉಚಿತನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆ ಶಿಬಿರಹಮ್ಮಿಕೊಳ್ಳಲಾಗಿದೆ. ಜನಹಿತ ಐಕೇರ ಸೆಂಟರ್ ಬೆಂಗಳೂರು/ಹಿಂದೂಪುರ ಡಾ. ಕೃಷ್ಣ ಮೋಹನ ಜಿಂಕಾ ಹಾಗೂ ಅವರ ತಂಡದವರು ನೇತ್ರತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ ಕೈಗೊಳ್ಳಲಿದ್ದಾರೆ.ಕಣ್ಣಿನ ತಪಾಸಣೆ ನಂತರ ರೋಗಿಗಳಿಗೆ ಶಸ್ತ್ರಚಿಕಿತ್ಸೆ ಅವಶ್ಯಕತೆ ಕಂಡುಬಂದರೆ ಉಚಿತ ಆದರಿಂದ. ಕಣ್ಣಿನ ತೊಂದರೆ ಇರುವವರು ಈ ಶಿಬಿರದಲ್ಲಿ ಭಾಗವಹಿಸಿ ಇದರ ಲಾಭ ಪಡೆಯಬೇಕೆಂದು ಮನವಿ ಮಾಡಿದರು.
ಮತ್ತು ಈ ಸಮಾರಂಭದಲ್ಲಿ ಜಿಲ್ಲಾ ಆರೋಗ್ಯಕುಟುಂಬ ಕಲಾಣ ಅಧಿಕಾರಿ ಮಹೇಶ ಕೋಣಿ. ಚಿಕ್ಕೋಡಿ ಉಪವಿಭಾಗಾಧಿಕಾರಿ ಸುಭಾಸ ಸಂಪಗಾವಿ.ಅಥಣಿ ತಹಶೀಲ್ದಾರ ವಾಣಿ ಯು, ಕಾಗವಾಡತಹಶೀಲ್ದಾರ ರಾಜೇಶ ಬುರ್ಲಿ. ಡಾ. ಎಸ್.ವಿ.ಮುನ್ಯಾಳ, ಡಾ. ಶರಣಪ್ಪ ಗಡೇದ, ಡಿವೈಎಸ್ಪಿಶ್ರೀಪಾದ ಜಲ್ಲೆ. ಡಾ. ಗೀತಾ ಕಾಂಬಳೆ,ಶಿವಾನಂದ ಕಲ್ಲಾಪುರ, ವೀರಣ್ಣಾ ವಾಲಿ.ಅಶೋಕ ಗುಡಿಮನಿ, ರಾಮಗೊಂಡ ಪಾಟೀಲ.ಖ್ಯಾತ ನೇತ್ರ ತಜ್ಞ ಡಾ| ಕೃಷ್ಣಮೋಹನ ಜಿಂಕಾ.ತಾಲೂಕಾ ಆರೋಗ್ಯಾಧಿಕಾರಿ ಡಾ. ಬಸಗೌಡಕಾಗೆ, ಡಾ. ರಮೇಶ ಹುಲಕುಂದ ಸೇರಿದಂತೆ ಇನ್ನಿತರರು ಆಗಮಿಸಲಿದ್ದಾರೆ.