2023: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಗೆ ನಾಳೆ ಆಗಸ್ಟ್ 30 ರಂದು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಚಾಲನೆ ಸಿಗಲಿದೆ...
2023: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ
ಯೋಜನೆಯಾದ ಗೃಹಲಕ್ಷ್ಮಿ ಯೋಜನೆಗೆ ನಾಳೆ
ಆಗಸ್ಟ್ 30 ರಂದು ಮೈಸೂರಿನ ಮಹಾರಾಜ
ಕಾಲೇಜು ಮೈದಾನದಲ್ಲಿ ಚಾಲನೆ ಸಿಗಲಿದೆ.
ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್
ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಹಿಳಾ
ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ
ಹೆಬ್ಬಾಳ್ಕರ್ ಪಾಲ್ಗೊಳ್ಳಲಿದ್ದಾರೆ.
ಮಹಿಳೆಯರನ್ನು ಆರ್ಥಿಕವಾಗಿ
ಸಬಲೀಕರಣಗೊಳಿಸುವ ಯೋಜನೆಯಾದ
ಗೃಹಲಕ್ಷ್ಮಿಗೆ ಈಗಾಗಲೇ ಶೇ.89 ರಷ್ಟು
ಗೃಹಿಣಿಯರು ನೋಂದಣಿಯಾಗಿದ್ದು, ಇನ್ನುಳಿದ
ಶೇ.11 ಜನ ತಾಂತ್ರಿಕ ಕಾರಣಗಳಿಂದ ನೊಂದಾಣಿ
ಬಾಕಿ ಇದೆ ಎಂದು ಮಹಿಳಾ ಮತ್ತು ಮಕ್ಕಳ
ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾಹಿತಿ
ನೀಡಿದ್ದಾರೆ.
ವರ್ಷಕ್ಕೆ 36,000 ಕೋಟಿ ವೆಚ್ಚ...
ಆಗಸ್ಟ್ 30 ರಂದು ಗೃಹಲಕ್ಷ್ಮಿ ಯೋಜನೆಗೆ
ಚಾಲನೆ ನೀಡುವ ಹಿನ್ನಲೆಯಲ್ಲಿ 'ಮಹಿಳೆಯರು
ತಮ್ಮ ಮನೆಯ ಮುಂದೆ ನಾ ಯಜಮಾನಿ
ಎಂದು ರಂಗೋಲಿ ಬಿಡಿಸಿ' ಯೋಜನೆಯನ್ನು
ಮನೆಗೆ ಬರಮಾಡಿಕೊಳ್ಳಲಿದ್ದಾರೆ.
ಈ ಯೋಜನೆಗೆ ಒಂದು ವರ್ಷಕ್ಕೆ ಅಂದಾಜು
36,000 ಕೋಟಿ ರೂಪಾಯಿ ವೆಚ್ಚವಾಗಲಿದೆ.
ವರ್ಷಕ್ಕೆ 1,70,000 ಕೋಟಿ ರೂಪಾಯಿ
ವೆಚ್ಚವಾಗಲಿದೆ. ಈ ಹಣವು ಮಹಿಳೆಯರಿಗೆ
ಆರ್ಥಿಕವಾಗಿ ಸಬಲೀಕರಣವಾಗಲು
ಉಪಯುಕ್ತವಾಗಲಿದೆ ಎಂದು ಸಚಿವರು
ಹೇಳಿದರು.
ಆಶಾ-ಅಂಗನವಾಡಿ
ಕಾರ್ಯಕರ್ತೆಯರಿಗೂ ಅನ್ವಯ
ಈ ಯೋಜನೆ ...
ಆಶಾ-ಅಂಗನವಾಡಿ
ಕಾರ್ಯಕರ್ತೆಯರಿಗೆ ಅನ್ವಯವಾಗುತ್ತದೋ
ಇಲ್ಲವೋ ಎಂಬ ಗೊಂದಲವಿದ್ದು, ಇದಕ್ಕೆ
ಮಹಿಳಾ ಸಚಿವೆ ಲಕ್ಷ್ಮಿ ಹೆಬ್ಬಾಳರ್ ತೆರೆ
ಎಳೆದಿದ್ದಾರೆ. ನಿನ್ನೆ ಆಗಸ್ಟ್ 28ರ
ಸೋಮವಾರದಂದು ಚಾಮರಾಜನಗರದಲ್ಲಿ
ಗೃಹಲಕ್ಷ್ಮಿ ಯೋಜನೆ ಪೂರ್ವ ಸಿದ್ಧತಾ
ಸಭೆಯಲ್ಲಿ ಮಾತನಾಡಿದ ಅವರು,
ಅಂಗನವಾಡಿ-ಆಶಾ ಕಾರ್ಯಕರ್ತೆಯರಿಗೂ
ಗೃಹಲಕ್ಷ್ಮಿ ಯೋಜನೆ ಅನ್ವಯವಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಯಾರಿಗೆಲ್ಲ ಸಿಗಲಿದೆ ಹಣ?
ಕುಟುಂಬ ನಿರ್ವಹಣೆಯ ಹೊಣೆ ಹೊತ್ತ
ಮಹಿಳೆಯರಿಗೆ ನಿತ್ಯ ಎದುರಾಗುವ
ಬೆಲೆಯೇರಿಕೆಯ ಸಂಕಷ್ಟಗಳನ್ನು ತಗ್ಗಿಸಿ,
ನೆಮ್ಮದಿಯ ಬದುಕು ಕಟ್ಟಿಕೊಳ್ಳಲು
ನೆರವಾಗುವ ಉದ್ದೇಶದೊಂದಿಗೆ
ಜಾರಿಗೊಂಡಿರುವ ಈ ಯೋಜನೆಯಡಿ
ಈಗಾಗಲೇ ರಾಜ್ಯದಿಂದ 1.08 ಕೋಟಿ
ಮಹಿಳೆಯರು ನೋಂದಣಿ ಮಾಡಿದ್ದಾರೆ.
ಈಗಾಗಲೇ ನೋಂದಣಿ ಮಾಡಿಕೊಂಡಿದ್ದವರಿಗೆ
ಆಗಸ್ಟ್ 30ರಂದು ಸಾಂಕೇತಿಕವಾಗಿ ಐದು
ಜಿಲ್ಲೆಯ ಫಲಾನುಭವಿಗಳಿಗೆ 2,000
ರೂಪಾಯಿ ವರ್ಗಾವಣೆ ಮಾಡಲಿದ್ದಾರೆ.
ಮರುದಿನವೇ ಅಂದರೆ ಆಗಸ್ಟ್ 31ರ ಗುರುವಾರ
'ರಕ್ಷಾ ಬಂಧನ' ಹಬ್ಬದ ದಿನವೇ ಇನ್ನುಳಿದ ಎಲ್ಲ
ಫಲಾನುಭವಿಗಳ ಖಾತೆಗೆ ತಲಾ 2,000 ಹಣ
ಜಮೆ ಆಗಲಿದೆ .